Wednesday, December 16, 2009

ನಮ್ಮ ಮಂಜ್ರಾಬಾದ್ ಕೋಟೆ


ಪಶ್ಚಿಮ ಘಟ್ಟಗಳ ಬಹುಮುಖ್ಯ ಭಾಗವಾಗಿರುವ ಸಕೇಲೇಶಪುರ ತಾಲ್ಲೂಕು ಪ್ರಕೃತಿ ಸೌಂದರ್ಯಕ್ಕೆ ಹೆಸರಾದುದು ಇದು ಕರ್ನಾಟಕ ಸ್ವಿಡ್ಜರ್ಲ್ಯಾಂಡ್ ಎಂದೇ ಪ್ರಸಿದ್ದಿ ಜೊತೆಗೆ ತನ್ನದೇ ಆದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ ಇಲ್ಲಿ ಹಲವಾರು ಪಾಳೆಗಾರರು ಆಳ್ವಿಕೆ ನೆಡೆಸಿದ್ದಾರೆ, ಜೊತೆಗೆ ಕೋಟೆಗಳನ್ನು ನಿರ್ಮಿಸಿ ಸಾಮ್ರಾಜ್ಯ ಸ್ಥಾಪಿಸಿದ ಕುರುಹುಗಳನ್ನೂ ಬಿಟ್ಟಿದ್ದಾರೆ. ಇವುಗಳಲ್ಲಿ ಮುಖ್ಯವಾಗಿ ಮುಂಜ್ರಾಬಾದ್ ಕೋಟೆ ಬಹು ಬೇಗನೆ ನೆನಪಿಗೆ ಬರುತ್ತದೆ.



ಈ ಮಂಜ್ರಾಬಾದ್ ಕೋಟೆ ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಹೋಗುವ ರಾಷ್ತ್ರೀಯ ಹೆದ್ದಾರಿಯಲ್ಲಿ ಸಕಲೇಶಪುರದಿಂದ ಐದು ಕಿಮೀ. ಮುಂದೆ ದೊಣಿಗಲ್ ಎಂಬ ಸ್ಥಳದಲ್ಲಿ ಇದೆ. ಈ ಕೋಟೆಯ ಒಂದು ಗುಡ್ಡದ ಮೇಲೆ ನಿರ್ಮಿಸಲಾಗಿದ್ದು ಇದನ್ನು ಆಡಾಣಿ ಗುಡ್ಡ ಎಂದು ಕರೆಯುತ್ತಿದ್ದರು. ಕೋಟೆಯನ್ನು ನಿರ್ಮಿಸಿದ ಮೇಲೆ ಕಾಲಕ್ರಮೇಣ ಆಡಾಣಿ ಗುಡ್ಡ ಹೆಸರು ಕಣ್ಮರೆಯಾಗಿದೆ. ಸಕಲೇಶಪುರದ ಮೂಲ ಹೆಸರು ಕಣ್ಮರೆಯಾಗಿದೆ. ಸಕಲೇಶಪುರದ ಮೂಲ ಹೆಸರು ಮಂಜ್ರಾಬಾದ್ ಎಂದಿತ್ತು. ಈ ಪ್ರದೇಶದಲ್ಲಿ ಕೋಟೆಯನ್ನು ನಿರ್ಮಿಸಿದ ಕಾರಣ ಈ ಸ್ಥಳದ ಹೆಸರನ್ನೇ ಕೋಟೆಗೆ ಇಡಲಾಗಿದೆ. ಮಂಜರಬಾದ್ ಎಂಬುದು ಅರಬ್ಬಿ ಭಾಷೆಯ ಮಂಜರ್ ಮತ್ತು ಅಬಾದ್ ಎಂಬ ಪದದಿಂದ ಬಂದಿದೆ ಎನ್ನಲಾಗಿದೆ. ಮಂಜರ್ ಎಂದರೆ ರಮಣೀಯ. ನೋಟಕ್ಕೆ ಆಶಯ ಎಂದೂ ಅಬಾದ್ ಎಂದರೆ ನೆಲಸಿದ ಸುಖಕರವಾದ ಎಂಬರ್ಥವಿದ್ದು ಒಟ್ಟಾಗಿ "ಸುಖಕರವಾದ ರಮಣೀಯ ನಾಗರಿಕ ನೆಲೆ" ಎಂಬುದಾಗಿದೆ.

ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಯಲ್ಲಿ 2 ಹಂತಗಳಲ್ಲಿ ನಿರ್ಮಿಸಿದ್ದು ಮೊದಲ ಹಂತದಲ್ಲಿ ಸುಮಾರು ೧೨ ಅಡಿಗಳ ಎತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಇಲ್ಲಿ ಎರಡನೇ ಹಂತದಲ್ಲಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಇಲ್ಲಿ ಮೊದಲ ಹಂತವನ್ನು ಸ್ಥಳಿಯ ಪಾಳೇಗಾರರಾದ ಐಗೂರು ನಾಯಕರು(ಬಲಂ ನಾಯಕರು) ನಿರ್ಮಿಸಿರಬಹುದೆಂದು ಊಹಿಸಲಾಗಿದೆ. ನಂತರ ಇವರಿಂದ ಟಿಪ್ಪು ಸುಲ್ತಾನ್ ತನ್ನ ಸಾಮ್ರಾಜ್ಯವನ್ನು ಶ್ರೀರಂಗಪಟ್ಟಣದಿ೦ದ ಮಂಗಳೂರಿನವರೆಗೂ ವಿಸ್ತರಿಸಿದಾಗ ಅದ್ನ್ನು ಮಧ್ಯದಲ್ಲಿ ವಿಶ್ರಾಂತಿಗಾಗಿ ಹಾಗೂ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಸಲುವಾಗಿ ನಿರ್ಮಿಸಿಕೊಂಡಿದ್ದಾನೆ ಎನ್ನಲಾಗಿದೆ.



ಈ ಕೋಟೆಯ ವಿಶಿಷ್ಟ ಶೈಲಿಯ ಹಿಂದೂ ಮುಸ್ಲಿಂ ವಾಸ್ತುವಿನಿಂದ ನಿರ್ಮಿಸಲಾಗಿದೆ. ಇದು ನಕ್ಷತ್ರಾಕಾರದಲ್ಲಿದ್ದು ಅದರ ದ್ವಾರದಲ್ಲಿಯೇ ನಕ್ಷೆಯನ್ನು ಬರೆಸಿದ್ದು ಆ ನಕ್ಷೆಯ ಪ್ರಕಾರವೇ ಕೋಟೆಯನ್ನು ನಿರ್ಮಿಸಿದ್ದಾರೆ. ಇಲ್ಲಿ ಕುದುರೆ ಲಾಯಗಳು, ಪಾಕಶಾಲೆ, ಸೈನಿಕರ ತಂಗುದಾಣಗಳು ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.
ನಾವು ಈ ಕೋಟೆಯನ್ನು ವೀಕ್ಷಿಸಬೇಕಾದರೆ ರಸ್ತೆಯಿಂದ ಆಡಾಣ್ಫೆ ಗುಡ್ಡಕ್ಕ್ಸೆ ತಲುಪಲು ಸುಮಾರು 500 ಮೀಟರ್ ಮೇಲಕ್ಕೆ ಕಾಲು ಯಾವುದೇರೀತಿಯ ಆಯಾಸವಾಗುವುದಿಲ್ಲ.ಮೇಲಿರಿದ ಮೇಲೆಒಟ್ಟು ಮುರು ಮಹಾ ದ್ವಾರಗಳಿವೆ. ದಾರಿಯಲ್ಲಿ ಕ್ರಮಿಸಿ ಅಲ್ಲಿಂದ 252 ಮೆಟ್ಟಿಲುಗಳನ್ನೇರಿ ಒಳಗೆ ಪ್ರವೇಶಿಸಬೇಕು. ತಂಪಾದ ಗಾಳಿ ಬೀಸುವುದುರಿಂದ ಯಾವುದೆ ರೀತಿಯ ಆಯಾಸವಾಗುವುದಿಲ್ಲ. . ಮೇಲೆರಿದ ಮೇಲೆ ಒಟ್ಟು ಮುರು ಮಾಹಾ ದ್ವಾರಗಳಿವೆ. ,
ಶತ್ರುಸೈನ್ಯದವರು ಸುಲಭವಾಗಿ ಪ್ರವೇಶಿಸದಂತೆ ಪ್ರತಿ ದ್ವಾರವನ್ನು ನಿರ್ಮಿಸಲಾಗಿದ್ದು ಈಗಲು ಸುಸ್ಟಿತಿಯಲ್ಲಿದೆ. ಕೊಟೆಯ ಸುತ್ತಲೂ ಸುಮಾರು ಐವತ್ತು ಅಡಿಯ ಕಾಲುವೆ ತೊಡಿದ್ದು ಶತ್ರುಗಳು ಸುಲಭವಾಗಿ ನುಸುಳದಂತೆ ಮಾಡಲಾಗಿದೆ. ಕೊಟೆಯ ಮಧ್ಯದಲ್ಲಿ ಒ೦ದು 40*40 ಅಡಿ ಅಳತೆಯಕೊಳವನ್ನು ನಿರ್ಮಿಸಿದ್ದು ವಿಶಿಷ್ಕ ರೀತಿಯಲ್ಲಿಗೆ. ಇಲ್ಲಿ ವಿಶಾಲವಾದ ಒಳಾಂಗಣವಿದ್ದು ಕೊಟೆಯ್8 ಭಾಗಗಳಲ್ಲಿ ಸೈನಿಕರು ಮೇಲಿನಿಂದಲೆ ಪಹರೆ ಕಾಯಲು ಅತ್ಯುತ್ಬುತವಾದ ಬುರುಜುಗಳನ್ನು ನಿರ್ಮಿಸಲಾಗಿದ್ದು ಇವುಗಳು ಸುಮಾರು 25 ಅಡಿ ಎತ್ತರದಲ್ಲಿ ಯಾವುದೇ ಕಬ್ಬಿಣದ ಬಳಕೆಯಲ್ಲಿದೆ, ಗೊಡೆಗೆ ಅಂಟಿಸಿದಸ್ಥಿತಿಯಲ್ಲಿರುವುದು ಬಹಳ ವಿಶಿಷ್ಕವಾಗಿವೆ.



ಪ್ರದೇಶವನ್ನು ಪುರಾಣದಲ್ಲಿ ಹಿಮಶೈಲ, ಹಿಮವಾನ್ ಎಂದು ಕರೆಯುತ್ತಿದ್ದರು. ಏಕೆಂದರೆ ಈಪ್ರದೇಶವು ವರ್ಷದ 6-8 ತಿಂಗಳುಗಳಕಾಲಹಿಮಿದಿಂದಲೇಶ್ ಆವೃತವಾಗಿರುತ್ತದೆ. ಈ ಕೋಟೆಯಮೇಲೆ ನಿಂತು ಸುತ್ತಲಿನ ಸೌಂದರ್ಯವನ್ನು ವೀಕ್ಷಿಸುವಾಗ ಪಶ್ಚಿಮ ಘಟ್ಟದ ರಮಣೀಯವಾದ ಬೆಟ್ಟಗುಡ್ಡಗಳ್ಳನ್ನುನಿತ್ಯ ಹರಿದ್ವರ್ಣದ ವನಗಳ ಸಸ್ಯಕಾಶಿಯನ್ನು ಪಚ್ಚಪೈರುಗಳನ್ನು, ಹಿಮದ ನದಿಯನ್ನು ಅದರಲ್ಲು ಮಳೆಗಾಲದ ಸಂದರ್ಭದಲ್ಲಿ ಸಂಪೂರ್ಣವಾಗಿ ಮಂಜಿನಿಂದ ಆವೃತವಾದಈ ಪ್ರದೇಶವನ್ನು ವರ್ಣಿಸುವುದಕ್ಕಿಂತ ಅನುಭವಿಸಿಯೇ ತೀರಬೇಕು.


ಸುಮಾರು 225 ಕಿ.ಮೀ ದೂರದಲ್ಲಿರುವ ಮಂಜ್ರಾಬಾದ್ ಕೋಟೆಯನ್ನು ಒಮ್ಮೆ ಅದರಲ್ಲೂ ಮಳೆಗಾಲದಲ್ಲಿ ಒ೦ದು ಸುತ್ತು ಹಾಕಿ ಬನ್ನಿ ಜೊತೆಗೆ ಹತ್ತಿರದಲ್ಲೆ ಇರುವ ‘ಬಿಸಿಲೆ’ಎಂಬ ಸುಂದರ ತಾಣವನ್ನು, ಅಗ್ನಿ ಗುಡ್ಡವನ್ನೂ,ಜೇನುಕಲ್ಲು ಬೆಟ್ಟವನ್ನು,ಅಲ್ಲೆಲ್ಲ ಸಿಗುವ ಚಿಕ್ಕ ಜಲಪಾತಹಗಳನ್ನು,(ಎಡೆಕುಮೇರಿ ರೈಲ್ವೆ ಮಾರ್ಗದಲ್ಲಿ) ಕಾಗಿನೆಹರೆಯನ್ನು ಸಾದ್ಯವಾದರೆ ಒಂದು ಟ್ರಕ್ಕಿಂಗ್ ಚಾರಿಣಿ ಮಾಡಿ ಇಂತಹ ಹಲವಾರು ರಮ್ಯತಾಣಗಳಿವೆ ಬನ್ನಿ ನೋಡಿ ಆನಂದಿಸಿ.

No comments:

Post a Comment