Sunday, September 20, 2009

ಗ್ರಾಮೀಣ ಪ್ರದೇಶ ಹಾಗು ಶಿಕ್ಷಣ

ಇಂದಿನ ಸಮಾಜದಲ್ಲಿ ಶಿಕ್ಷಣ ಎಲ್ಲರಿಗೂ ಅತ್ಯವಶ್ಯಕವಾಗಿ ದೊರಕಬೇಕಾಗಿರುವಂತಹ ಒಂದು ಅತ್ಯಮೂಲ್ಯ ವಸ್ತು. ಆದರೆ ಇಂದಿನ ಯುವ ಪೀಳಿಗೆಗೆ ಯಾವ ರೀತಿಯ ಶಿಕ್ಷಣ ಕೊಡಬೇಕೆಂದು ಯಾರಿಗೂ ತಿಳಿಯುತ್ತಿಲ್ಲ, ಸ್ವತಹ ವಿದ್ಯಾರ್ಥಿಗಳಿಗೆ ನಾವು ಏನನ್ನು ಯಾವ ಕಾರಣಕ್ಕಾಗಿ ಓದುತ್ತಿದ್ದೇವೆ ಎಂದು ಮನದಟ್ಟು ಮಾಡಿ ಕೊಳ್ಳಲು ಸಾಧ್ಯವಾಗದ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಅದರಲ್ಲೂ ನಮ್ಮ ಗ್ರಾಮೀಣ ಪರಿಸರದ ಶಿಕ್ಷಣ ವ್ಯವಸ್ತೆ ಅಂತೂ ಜಿಡ್ಡು ಗಟ್ಟಿದ ಯಾವುದೇ ರೀತಿಯ ಚಲನೆಯಲ್ಲಿ ಇಲ್ಲದ ಧುಸ್ತಿತಿಯಲ್ಲಿದೆ ಎಂದು ಹೇಳಲು ವಿಷಾದವಾಗುತ್ತದೆ.
ಇಂದಿನ ವಿಚಾರವಾದಿಗಳೆಂದು (ಬುದ್ದಿಜಿವಿಗಳೆಂದು) ಬೊಗಳೆ ಬಿಡುವ ವ್ಯಕ್ತಿಗಳಿಗೆ ಇಂತಹ ವಿಷಯದ ಬಗ್ಗೆ ಚಿಂತಿಸಲೂ ಸಮಯವಿಲ್ಲ ಅವರದೇನಿದ್ದರೂ ಸೋಗಲಾಡಿತನದ ಕಾರ್ಯಕಸ್ಟೆ ಮೀಸಲು, ಪೋಷಕರಿಗೆ ಅವರದೇ ಅದ ಸಮಸ್ಯೆ, ಹಾಗು ಶಿಕ್ಷಕರಿಗೆ ಅವರ ಸಂಸಾರ ಹಾಗೂ ಬಡ್ಡಿ ವ್ಯವಹಾರದ ಯೋಚನೆ ಹೀಗಿರುವಾಗ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳ ಬಗ್ಗೆ ಹಾಗೂ ಅವರ ಶಿಕ್ಷಣದ ಬಗ್ಗೆ ಯಾರು ತಾನೆ ಯೋಚಿಸುತ್ತಾರೆ. ಪರಿಸ್ತಿತಿ ಹೀಗಿರುವಾಗ ಉತಾಮ ಸಮಾಜವನ್ನಾದರೂ ಕಟ್ಟುವುದು ಹೇಗೆ ? ವಿದ್ಯಾರ್ಥಿಯ ಆಸಕ್ತಿಯನ್ನು ಪತ್ತೆ ಹಚ್ಚಿ ಅವನಿಗೆ ಬೇಕಾದ ಶಿಕ್ಷಣವನ್ನು ನಿಡುವ ಕಲೆಯನ್ನು ಹೊಂದಿರುವ ಶಿಕ್ಷಕರು ನಮ್ಮಲ್ಲಿ ಎಷ್ಟು ಜನ ಸಿಗುತ್ತಾರೆ? ಎಲ್ಲ್ಲೋ ಬೆರಳೆಣಿಕೆಯಸ್ಟುಜನ ಇದ್ದರೂ ಅವರಿಗೆ ಬೇಕಾದ ಸರಿಯಾದ ಸೌಲಭ್ಯ ಗಳೇ ಇರುವುದಿಲ್ಲ ಇಂತಹ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆದ ನಮ್ಮ ಮಕ್ಕಳು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸಲು ಹೇಗೆ ಸಹಾಯಕವಾಗುತ್ತದೆ !?
ಗ್ರಾಮೀಣ ಪ್ರದೇಶದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ತಾವು ಮುಂದೆ ಏನಾಗಬೇಕು ? ಹಾಗೆ ಆಗಲು ಯಾವ ವಿಷಯವನ್ನು ಅಧ್ಯಯನ ಮಾಡಬೇಕೆಂದೇ ಗೊತ್ತಿಲ್ಲ ಮತ್ತು ಎಸ ಎಸ ಎಲ ಸಿ ಮುಗಿದ ನಂತರ ಯಾವ ಯಾವ ವಿಭಾಗಗಳಿವೆ ಅದರಲ್ಲಿ ಯಾವ ವಿಷಯವನ್ನು ಅಧ್ಯಯನ ಮಾಡಿದರೆ ಯಾವ ವೃತ್ತಿಗೆ ಹೋಗಬಹುದು ಎಂದೆ ಗೊತ್ತಿಲ್ಲ ! ಯಾರೋ ಒಬ್ಬರು ಈ ವಿಷಯ ತಗೋ ಕಲಿಯಲು ಸುಲುಭ ಎನ್ನುತ್ತಾರೆ ಅವನು ಅದನ್ನೇ ತೇಗೆದುಕೊಲ್ತಾನೆಅವನ ಅಸೆ ಆಕಾಂಕ್ಷೆಗಳಿಗೆ ಬೆಲೆಯೇ ಇಲ್ಲ.
ಉದಾ : ನಾನು ನನ್ನ ಎಸ ಎಸ ಎಲ ಸಿ ಉತ್ತಿರ್ಣ ಅದಾಗ ಮುಂದೆ ಕಾಲೇಜಿನಲ್ಲಿ ಯಾವ ಯಾವ ವಿಷಯಗಳಿವೆ ಎಂದೆ ತಿಳಿದಿರಲಿಲ್ಲ!! ಹೀಗಿರುವಾಗ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸುವುದಾದರೂ ಹೇಗೆ?
ಇನತಹ ಚಿಕ್ಕ ಪುಟ್ಟ ಮೂಲ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಅವುಗಳನ್ನು ಸುಧಾರಿಸುವುದು ಕಷ್ಟದ ಕೆಲಸವೇನು ಅಲ್ಲ ಆದರೆ ಇದರ ಸುದಾರಣೆಗೆ ಕೆಳಗಿನ ಮಟ್ಟದಿಂದ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರಿಗೆ ಕಲಿಸುವ ಹಾಗೂ ತಾವೂ ಕಲಿಯುವ ಉತ್ಶಾಹವನ್ನು ಸೂಕ್ತವಾದ ತರಬೇತಿಮೂಲಕ ನೀಡಿದರೆ ಒಳ್ಳೆಯದು, ಇದರಿಂದ ಯುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತಾನು ಏನಾಗಬೇಕು ? ಹಾಗೆ ಆಗಬೇಕಾದರೆ ಏನನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕು ಎಂದು ಅರಿವಾಗುತ್ತದೆ.
ಈ ರೀತಿಯ ವಿಚಿತ್ರವಾದ ಹಾಗೂ ವೈರುದ್ಯ ಗಳಿಂದ ಕೂಡಿದ ಈ ನಮ್ಮ ಸಮಾಜದಲ್ಲಿ ನಮ್ಮ ಯುವ ಪೀಳಿಗೆಗೆ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿಯೇ ಕಾಣದಾಗಿರುವ ಈ ಸಂದರ್ಭದಲ್ಲಿ ಇದರ ಬಗ್ಗೆ ಗಂಬೀರ ಚರ್ಚೆಯಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ , ಚಿಂತಕರ, ಶಿಕ್ಷಣ ತಜ್ನರ ಹಾಗೂ ಪಾಲಕರ ಕರ್ತವ್ಯವಾಗಿದೆ.

No comments:

Post a Comment