ಆತ್ಮಿಯರೇ ನಾನು ಪ್ರವೀಣ್
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಒಂದು ಪುಟ್ಟ ಕುಗ್ರಾಮ ಜಗಾಟ ಎಂಬುದು ನಮ್ಮೂರು, ಈ ಊರಿಗೆ ಯಾವುದೇ ರೀತಿಯ ವಾಹನ ಸೌಲಭ್ಯವೂ ಇಲ್ಲದ ಶಾಲೆಗೆ ಸುಮಾರು ನಾಲ್ಕು ಕಿ. ಮಿ. ನಡೆದೇ ಹೋಗಬೇಕಾದ ಪರಿಸ್ಥಿತಿ ಇಗಲೂ ಇದೆ ಆದರೆ ಈ ಊರು ಅಚ್ಚ ಹಸಿರಿನಿಂದ ಬೆಟ್ಟ ಗುಡ್ಡಗಳಿಂದ ಕೂಡಿದ ಬೆಡಗಿನ ರಮ್ಯ ತಾಣ ಎನ್ನಲು ಹೆಮ್ಮೆ ಎನಿಸುತ್ತದೆ. ಈ ಊರಿನಲ್ಲಿ ಸುಮಾರು ಎಂಟು ಮನೆಗಳಿದ್ದು ಒಟ್ಟು ಐವತ್ತು ಜನರಿದ್ದಾರೆ,ಇ ಐವತ್ತು ಜನರೂ ಸಾಕ್ಷರರು ಆಗಿದ್ದು ಸುಮಾರು ಹತ್ತು ಜನರು ಪದವಿದರರೂ ಮತ್ತು ಸ್ನಾತಕೋತ್ತರ ಪದವಿದರರೂ ಇದ್ದಾರೆ. ಅದರಲ್ಲಿ ನಾನೂ ಒಬ್ಬ ಎನ್ನಲು ಕುಶಿಯಾಗುತ್ತದೆ
ಈ ಊರಿನ ವಿಶೇಷವೆಂದರೆ ಇಲ್ಲಿನ ಎಲ್ಲ ಯುವಕರು ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದ್ದು ತಮ್ಮದೇ ಅದ ಸ್ವಂತ ಉದ್ಯೋಗ ಆರಂಬಿಸಿ ಹಲವಾರು ಜನರಿಗೆ ಉದ್ಯೋಗ ನೀಡಿದ್ದಾರೆ ಕೋಟ್ಯಾಂತರ ರೂಪಾಯಿಯ ವ್ಯವಹಾರ ನಡೆಸುತ್ತಿದ್ದಾರೆ. ಅದರಲ್ಲಿ ನಾನು ಸಹ ಚಿಕ್ಕಸಾಮನ್ಯ ಬಡ ಕುಟುಂಬದಿಂದ ಬಂದು ನನ್ನದೇ ವ್ಯವಹಾರ ಪ್ರಾರಂಬಿಸಿ ಒಂದು ಉತ್ತಮ ಪರಿಸ್ಥಿತಿಗೆ ಬಂದಿದ್ದೇನೆ ಎನ್ನಲು ಹೆಮ್ಮೆ ಎನಿಸುತ್ತದೆ.
ಅದ್ದರಿಂದ ನಾವು ಬೇರೆಯವರನ್ನು ಅಥವಾ ಪೋಷಕರನ್ನು ಧುಸಿಸದೆ ಏನಾದರೂ ಸಾಧಿಸಬೇಕಂಬ ಛಲವಿದ್ದರೆ ಏನು ಬೇಕಾದರು ಸಾಧಿಸ ಬಹುದು ಎನ್ನಲು ನಾವೇ ಒಂದು ಚಿಕ್ಕ ಉದಾಹರಣೆ ಅಸ್ಟೆ. ಸ್ನೇಹಿತರೇ ಬನ್ನಿ ಬೇರೆಯವರಿಗೆ ಅವಲಂಬಿಗಲಾಗದೆ ಸ್ವಾಭಿಮನದಿಂದ ಏನನ್ನಾದರೂ ಸಾದಿಸೋಣ.
tumbaa vicharayukta lekhana .heege bareyuttiri.
ReplyDeleteThis comment has been removed by the author.
ReplyDeleteSuper Maga
ReplyDelete